Thursday 21 June 2012

English ಭಾಷೆಯಾಗಿ ಬೇಕು : ಮಾಧ್ಯಮವಾಗಿ ಅಲ್ಲ



ಭಾಷೆಯು ಒಂದು ಸಂವಹನ ಮಾಧ್ಯಮ ಮಾತ್ರವಲ್ಲ, ಅದೊಂದು ಸಾಂಸ್ಕೃತಿಕ ಸಂಸ್ಥೆ. ಅದು ತನ್ನನ್ನು ಬಳಸುವ ಜನರ ಸಾಮಾಜಿಕ, ಭಾವನಾತ್ಮಕ ಮತ್ತು ಭೌದ್ದಿಕ ಬದುಕಿನ ಅವಿಭಾಜ್ಯ ಅಂಗ. ಯಾವುದೇ ಒಂದು ಸಮಾಜದಲ್ಲಿ ಶತಮಾನಗಳ ಸಾಹಿತ್ಯಿಕ ಸಂಪ್ರದಾಯವನ್ನು ಹೊಂದಿರುವ ಜೀವಂತ ಭಾಷೆಗಳನ್ನು ಎಲ್ಲಿಂದಲೋ ಬಂದ ಇತರ ಭಾಷೆಗಳು ಅಷ್ಟು ಸುಲಭವಾಗಿ ಎರಡನೇ ದರ್ಜೆಯ ಸ್ಥಾನಮಾನಗಳಿಗೆ ತಳ್ಳಿಬಿಡಲು ಸಾಧ್ಯವಿಲ್ಲ. ಒಂದು ಭಾಷೆ ಎಷ್ಟು ಸಮರ್ಥವಾದದ್ದು ಅಥವಾ ದುರ್ಬಲವಾದದ್ದು ಎಂಬ ವಿಷಯವು ಎಷ್ಟು ವಿಭಿನ್ನ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವುದರಿಂದಲೇ ತೀರ್ಮಾನವಾಗುತ್ತದೆ. ಸಮಾಜ, ಜೀವನ, ಶಿಕ್ಷಣ,  ಸರ್ಕಾರ, ನ್ಯಾಯಾಂಗ, ವಾಣಿಜ್ಯ, ಕೈಗಾರಿಕೆ, ರಕ್ಷಣೆ, ನೀತಿನಿರೂಪಕ ವಲಯಗಳಲ್ಲಿ ಸಮರ್ಥವಾಗಿ ಬಳಸಬೇಕಿದೆ, ಆಗ ಪ್ರಗತಿಯ ವೇಗವು ಹೆಚ್ಚಾಗುತ್ತದೆ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಕೆಲಸದಲ್ಲಿ ಭಾಷಾ ಬೆಳವಣಿಗೆಯು ಕೇಂದ್ರ ಸ್ಥಾನವನ್ನು ಹೊಂದಿರುತ್ತದೆ. ಅದೇ ರೀತಿ ಆರ್ಥಿಕ-ಸಾಂಸ್ತೃತಿಕ-ರಾಜಕೀಯಾ ಅಭಿವೃದ್ದಿಯ ತಳಹದಿಯಂತೆ ಕೆಲಮಾಡುವುದು ಶೈಕ್ಷಣಿಕ ಪ್ರಗತಿಯೇ ಆಗಿದೆ. ದೇಶದ ಪ್ರಗತಿ ಭಾಷೆಯ ಪ್ರಗತಿಯಲ್ಲಿ ಮಿಳಿತ ಗೊಂಡಿರುತ್ತೆ. 
ಮಾತೃಭಾಷೆಯಲ್ಲಿ ಸಮಗ್ರವಾದ ತರಬೇತಿಯನ್ನು ಪಡೆದಿರುವ ವಿದ್ವಾಂಸರು ಭೌದ್ದಿಕವಾಗಿ ಅತ್ಯಂತ ಸಮರ್ಥರಾಗಿರುವರೆಂಬ ಸಂಗತಿಯನ್ನು ನಾವು ವಿಪುಲವಾದ ಅನುಭವದಿಂದ ತಿಳಿದು ಕೊಂಡಿದ್ದೆವೆ. ಪ್ರಾದೇಶಿಕ ಮಾತೃಭಾಷೆಯಲ್ಲಿಯೇ ಭದ್ರವಾದ ಅಡಿಪಾಯ ಬಿದ್ದ ನಂತರವೆ ಅನ್ಯ ಭಾಷ ಕಲಿಕೆ ಪ್ರಾರಭವಾಗಬೇಕು ಏಕೆಂದರೆ ತನ್ನ ಭಾಷೆಯನ್ನು ಸಲೀಸಾಗಿ ಉಪಯೋಗಿಸಲಾರದ ಯಾವುದೇ ಜನ ಸಮುದಾಯವು ಇನ್ನೊಂದು ಭಾಷೆಯನ್ನು ಸಮರ್ಥವಾಗಿ ಉಪಯೋಗಿಸಲಾರರು. ವಸಾಹತುಶಾಹಿಗಳು ತಮ್ಮ ಲಾಭಕ್ಕಾಗಿ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸುತ್ತಾ ಬರುತ್ತಿದ್ದುರು. ವಿದೇಶಿ ಭಾಷೆಗಳ ಹೇರಿಕೆಯ ವಿರುದ್ದ, ದೇಶಿಯ-ಪ್ರಾದೇಶಿಕ ಭಾಷೆಗಳ ಶಿಕ್ಷಣ ಮಾಧ್ಯಮಕ್ಕಾಗಿ ಚಿಂತನೆಗಳು ಪ್ರಭಲವಾಗಿ ಬೆಳದಿದ್ದನ್ನ ನೆನೆಸಿಕೊಳ್ಳಬೇಕಿದೆ. ವಸಾಹತುಶಾಹಿಗಳ ಅಪಾಯವನ್ನು ಮನಗಂಡು 1964 ರ ಕೊಠಾರಿ ಆಯೋಗ ಮಾಧ್ಯಮದ ಪ್ರಶ್ನೆಯನ್ನು ವಿವರವಾಗಿ ಚರ್ಚಿಸಿ ಎಲ್ಲಾ ಹಂತಗಳಲ್ಲಿಯೂ ಶಿಕ್ಷಣ ಮತ್ತು ಪರೀಕ್ಷೆಗಳಿಗಾಗಿ ಮಾತೃಭಾಷೆ, ಪ್ರಾದೇಶಿಕ ಭಾಷೆಗಳನ್ನೆ ಬಳಸಬೇಕೆಂದು ಖಡಾಖಂಡಿತವಾಗಿ ಹೇಳಿತು. ಆಗ ಅನೇಕ ರಾಜ್ಯಗಳು ಹಸಿ-ಹಸಿಯಾಗಿ ಕಲೆ ಮತ್ತು ಸಮಾಜ ವಿಜ್ಞಾನಗಳಲ್ಲೂ ಇಂಗ್ಲಿಷ್ ಜೊತೆ ಪ್ರಾದೇಶಿಕ, ಮಾತೃಭಾಷೆಗಳನ್ನು ಮಾಧ್ಯಮವಾಗಿ ಜಾರಿಗೆ ತಂದವು. ಆದರೆ ವೈದ್ಯಕೀಯ, ಇಂಜಿನಿಯರಿಂಗ್, ಮುಂತಾದ ವೃತ್ತಿಪರ ವಿಷಯಗಳಲ್ಲಿ ಇಂಗ್ಲಿಷ್ ಭಾಷೆಯಲ್ಲೆ ಮಾಧ್ಯಮವಾಗಿ ಉಳಿಯಿತು. ಸಾಮಾಜಿಕ-ಆಥರ್ಿಕಸ್ಥಿತಿ ಬದಲಾವಣೆಯಾಗಬೇಕಾದರೆ ಶಿಕ್ಷಣ ಒಂದು ಪ್ರಬಲ ಅಯುಧವಾಗಬೇಕಾಗಿದೆ. ಶೋಷಿತರು ತಾವು ಯಾರು? ತಮ್ಮ ಪರಿಸ್ಥಿತಿ ಏಕೆ ಹೀಗೆದೆ? ತಾವು ಇದನ್ನು ಹೇಗೆ ಬದಲಾಯಿಸಿಕೂಳ್ಳಬೇಕು? ಎಂಬುದನ್ನು ತಿಳಿಯುವ ವಿಶ್ಲೇಷಣಾ ಜ್ಞಾನ ಸಂಪಾದಿಸಲು ಪುಷ್ಟವಾಗಿ ಬೆಳೆದ,ೆ ಸರಳವಾಗಿ ಅರ್ಥೈಸಲು ಸಹಕಾರಿಯಾದ ಭಾಷೆ ಬೇಕು. ಇದು ಮಾತೃಭಾಷಾ ಶಿಕ್ಷಣದಿಂದ ತುಂಬಾ ಸುಲಭ. ಸಾಮಾಜಿಕ ಬದಲಾವಣೆ ಅಗತ್ಯವಾದ ಎಚ್ಚರವನ್ನು ಹುಟ್ಟಿಸಲು, ಜ್ಞಾನವನ್ನು ನೀಡಲು, ಮೊದಲು ಶಿಕ್ಷಣ ಕ್ರಮದಲ್ಲಿ, ಶಿಕ್ಷಣ ಮಾಧ್ಯಮದಲ್ಲಿ ಬದಲಾವಣೆಗಳು ಉಂಟಾಗಬೇಕಿದೆ. ಭಾಷಾ ಹೇರಿಕೆಯು ಸಾಮ್ರಾಜ್ಯಶಾಹಿಯ ಪ್ರತಿ ಹೆಜ್ಜೆಯಲ್ಲಿ ಜೊತೆ ಸಾಗುತ್ತಿರುತ್ತದೆ. ಅದು ಪ್ರಾದೇಶಿಕ ಭಾಷೆಗಳನ್ನು ನಿಧಾನಗತಿಯಲ್ಲಿ  ನುಂಗಲು ಪ್ರಯುತ್ನಿಸುತ್ತಿರುತ್ತದೆ. ಸಾಮಾಜಿಕ, ಆರ್ಥಿಕ ಶಕ್ತಿ ಸಂಭದಗಳ ಸ್ವರೂಪವು ಭಾಷಾ ಬಳಕೆಯ ವಿನ್ಯಾಸವನ್ನು ನಿರ್ಧರಿಸುತ್ತದೆ. ಭಾಷೆಯ ಸಾವು, ಬಾಷೆಯ ಹತ್ಯೆ, ಭಾಷೆಯ ಪುನರುಜ್ಜೀವನಇವೆಲ್ಲ ಪ್ರಕ್ರಿಯೆಗಳೂ ತಮ್ಮಷ್ಟಕ್ಕೆ ತಾವೇ ನಡೆಯಲಾರವು. ಈ ಪ್ರಕ್ರಿಯೆ ಆರ್ಥಿಕ - ರಾಜಕೀಯ ಅಭಿವೃದ್ದಿಯಲ್ಲಿ ಆಗುವ ಎಲ್ಲಾ ಬದಲಾವಣೆಗಳೂ ಅಥವಾ ನೀಡಲಾಗುವ ಎಲ್ಲಾ ಸವಲತ್ತುಗಳು ಸಮಾಜದ ಮೆಲ್ವರ್ಗಗಳು ತಮ್ಮ ಹಿತವನ್ನು ಕಾಪಾಡಿಕೊಳ್ಳಲು ಮಾಡಿಕೊಳ್ಳುವ ಹೊದಾಣಿಕೆಗಳ ಇನ್ನೊಂದು ರೂಪವೇ ಆಗಿರುತ್ತದೆ. ಸಂವಹನ ಮಾಧ್ಯಮದ ಮೇಲೆ ಅಧಿಕಾರಕೇಂದ್ರಿಕರಿಸಲು ಭಾಷೆಯು ಮುಖ್ಯ ಉಪಕರಣವಾಗಿರುವ ಶಿಕ್ಷಣ ವ್ಯವಸ್ಥೆಯನ್ನು ತನ್ನಂತೆ ರೂಪಿಸಲು ಮುಂದಾಗುತ್ತದೆ. ಹೀಗಾಗಿ ಸಹಜವಾಗೀ ಸಾಮ್ರಾಜ್ಯಶಾಹಿಯ ಬಾಯಿಂದ ಇಂಗ್ಲಿಷ್ ಜಪ ನಡೆಯುತ್ತದೆ.

ಇದು ಜಾಗತೀಕರಣದ ಕೊಡುಗೆ : ಪ್ರಾದೇಶಿಕ, ಮಾತೃ ಭಾಷೆಗಳ ಹತ್ಯೆ ಪ್ರಕರಣದಲ್ಲಿ ಸಾಮ್ರಾಜ್ಯಶಾಹಿ ಮತ್ತು ದೇಶಿಯ ಬಂಡವಾಳಶಾಹಿ, ಪಾಳೇಗಾರಿ ಪ್ರಭುತ್ವಗಳೇ (ಕಾಂಗ್ರೇಸ್, ಬಿಜೆಪಿ ಎನ್ನಲು ಭಯಯವೇನಿಲ್ಲ) ಅಪರಾದಿಗಳು. ಏಕೆಂದರೆ ಧೇಶಿಯ ಸಂಸ್ಕೃತಿಯನ್ನು ಗುಲಾಮಗಿರಿಗೆ ತಳ್ಳಿದ ಕೀರ್ತಿ ಇವರಿಗಿದೆ. ಇವರ ಜಾಗತೀಕರಣದ ಸ್ವಾಗತದಿಂದ ದೇಶಿಯ ಭಾಷೆಗಳ ಕೊಲೆ ಪ್ರಾರಂಭವಾಗಿದ್ದು. ಶಿಕ್ಷಣ, ಉದ್ಯೋಗ, ತ್ರಂತ್ರಜ್ಞಾನದ ಹೆಸರಿನಲ್ಲಿ ಅಂಗ್ಲ ಭಾಷೆಯ ವ್ಯಾಮೋಹ ಹೆಚ್ಚಿಸಲಾಗುತ್ತಿದೆ. ಏಕಮುಖ ಸಂಸ್ಕೃತಿಯನ್ನು ಹೇರುವ ಮೂಲಕ ಮತ್ತೆ ಭಾಷಾ ಗುಲಾಮಗಿರಿಗೆ ತಳ್ಳುವ ಯತ್ನ ಇದಾಗಿದ್ದು ಇಂಗ್ಲೀಷ್ ಮಾತ್ರವೇ ಭಾಷೆ. ಅದಿಲ್ಲದೆ ಬದುಕಿಲ್ಲ ಎನ್ನುವ ಭ್ರಮೆಯನ್ನು ಸೃಷ್ಠಿಸಲಾಗುತ್ತಿದೆ. ಸಾರ್ವಜನಿಕ ರಂಗದಲೂ ಉದ್ಯೋಗಗಳು ನಾಶಗೊಳ್ಳುತ್ತಿವೆ. ಖಾಸಗಿ ರಂಗದಲ್ಲಿ ಅಭದ್ರತೆಯಲ್ಲಿ ಅರೆ ಉದ್ಯೋಗಿಗಳ ಬದುಕು ಅತಂತ್ರದಲ್ಲಿದರು ಅಲ್ಲಿ ಅನಗತ್ಯವಾಗಿ ಅಂಗ್ಲ ಭಾಷೆಯ ವ್ಯಾಮೋಹ ಸೃಷ್ಠಿಸಲಾಗುತ್ತಿದೆ. ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಮಾತ್ರ ಬದುಕು ಸೂಸುತ್ರ ಎಂಬ ಭ್ರಮೆ ಹುಟ್ಟಿಸಲಾಗುತ್ತಿದೆ.  ಹೀಗಾಗಿ ನಾಯಿಕೊಡೆಗಳಂತೆ ಅಂಗ್ಲ ಶಾಲೆಗಳು ಆರಂಭ. ಭಾಷೆ ಕಲಿಸುವುದಕ್ಕಿಂತ ಹಣ ಮಾಡುವುದೇ ಅವುಗಳ ಕಾಯಕ. ಅವುಗಳಿಗೆ ಸರ್ಕಾರದ ಶ್ರೀರಕ್ಷೆ. 
ಇಂಗ್ಲೀಷ್ ಓದಿದೋರೆಲ್ಲಾ ಉದ್ಯೋಗ ಪಡೆದಿಲ್ಲ. ಹಾಗೇ ಭ್ರಮೆ ಸೃಷ್ಠಿಸಲಾಗುತ್ತಿದೆ. ಕೇವಲ ಉದ್ಯೋಗ, ಸಂಪರ್ಕ ಸಂವಹನದ ಹೆಸರಿನಲ್ಲಿ ಮಾತೃಭಾಷೆ ನಿಸ್ಸಪ್ರಯೋಜಕ ಎಂಬ ಅಪಪ್ರಚಾರದ ಹಿಂದೆ ಅಳುವ ಸರ್ಕಾರಗಳ ನಿಲುವು ಯಾರ ಹಿತಕ್ಕಾಗಿ? ಎಂಬುದು ಚರ್ಚಿತವಾಗಬೇಕಿದೆ.
ಬದಲಾದ ಸನ್ನಿವೇಶ: ಸ್ವಾತಂತ್ರ್ಯ ನಂತರದ ದಿನಗಳಲ್ಲಿ ನಮ್ಮ ಸರ್ಕಾರಗಳು ಎಲ್ಲಾ ಹಂತದಲ್ಲೂ ಮಾತೃಭಾಷೆಗಳ ಪ್ರಾದಾನ್ಯತೆ ನೀಡಲಿಲ್ಲ. ಜಪಾನ್, ಚೀನಾ, ಇತರ ದೇಶಗಳು ತಮ್ಮ ದೇಶಿಯ ಭಾಷೆಯಲ್ಲಿಯೇ ಶಿಕ್ಷಣ, ಆಡಳಿತ, ತಂತ್ರ ಜ್ಞಾನಗಳ ಅಭಿವೃದ್ಧಿ ಪಡಿಸಿಕೊಂಡರೆ ನಾವಿನ್ನು ಬ್ರಿಟೀಷ್ ಗುಲಾಮಗಿರಿಯಲ್ಲಿಯೇ ಉಳಿದಿದ್ದೇವೆನ್ನುವುದಲ್ಲದೆ ನಮ್ಮದಲ್ಲದ ಭಾಷೆಯ ಮೇಲೆ ಅವಲಂಬನೆ ಅಗಿರುವುದು ನಾಚಿಕೆಗೇಡು. ನಮ್ಮ ಉತ್ಪಾದನಾ ವ್ಯವಸ್ಥೆಯನ್ನು ಸಮರ್ಥವಾಗಿ ರೂಒಇಸಲು ಮಾತೃಭಾಷೆ ಎಲ್ಲೆಡೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕಿತ್ತು. ಬದಲಾದ ಸನ್ನಿವೇಶಗಳಲ್ಲಿ ಜಾಗತೀಕರಣದ ದಾಳಿ, ಅದರ ವ್ಯಾಪಕ ಪ್ರವೃತ್ತಿ, ಅದಕ್ಕಾಗಿ ಅನಗತ್ಯ ಸ್ವರ್ಧೆ, ಸಿಕ್ಕಷ್ಟು ಲಪಟಾಯಿಸಬೇಕೆನ್ನುವ ತರಾತುರಿ, ಅವಕಾಶ ವಂಚಚಿತನಾಗುವೆ ಎನ್ನುವ ಅತಂಕಗಳು ಇಂದು ಅಂಗ್ಲ ಭಾಷೆಯ ವ್ಯಾಮೋಹಕ್ಕೆ ಕಾರಣಗಳು. ಅಲ್ಲದೆ ಭಾಷೆ ಕಲಿಕೆಯಲ್ಲಿ ಹಿಂದುಳಿದರೆ ಭವಿಷ್ಯ ಮುಂಕಾದಿತು ಎನ್ನುವ ಕೀಳಿರಿಮೆ. ಉದ್ಯೋಗ ವಂಚಿತನಾಗುವೆ ಎನ್ನುವ ಭಯವು ಸೇರಿಕೊಂಡತೆ ನಮ್ಮ ನ್ಯಾಯಾಂಗ, ಆಡಳಿತ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಶಿಕ್ಷಣ ಕ್ರಮ ಅಂಗ್ಲ ಭಾಷೆಯ ಕಲಿಕೆಯ ಕಡೆ ಅಕರ್ಷಿಸುತ್ತಿವೆ. ಇದನ್ನೇ ವ್ಯಾಪಾರಿ ಮನೋವೃತ್ತಿಯ ಅಂಗ್ಲ ಶಾಲೆಗಳು ಹಣ ಮಾಡುವ ದಂದೆಗೆ ಬಳಸಿಕೊಳ್ಳುತ್ತಿವೆ. ಶತಮಾನಗಳಿಂದ ಇಡೀ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗಿದ್ದ ತಳಸಮುದಾಯಗಳಿಗೆ ಇಂಗ್ಲೀಷ್ ಕಲಿಯದಿದ್ದರೆ ಮತ್ತಷ್ಟು ತುಳಿತಕೊಳ್ಳಪಡುವೇವು ಎನ್ನುವ ಆಧಾರ ರಹಿತ ಕೊರಗು. ಜನ ಭಾಷೆಯನ್ನೇ ಇಲ್ಲವಾಗಿಸುವ ಮೂಲಕ ಜನ ಸಮುದಾಯಗಳನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿಯಲೆತ್ನಿಸುತ್ತಿರುವ ಶಕ್ತಿಗೆ ನಾವು ಬಲಿಯಾಗಿ ಮಾತೃ ಭಾಷೆಯಲ್ಲಿ ನಮ್ಮದೆಲ್ಲವನ್ನು ಪಡೆಯಬೇಕು ಎನ್ನುವಾಗಲು, ಸಾಮ್ರಾಜ್ಯಶಾಹಿಯ ಕುತಂತ್ರ ಅರಿಯಲಾದರು, ಸಂವಹನ ಸಾಧನವಾಗಿ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕಾಗಿದೆ. ಅದು ಶಾಲಾ ಹಂತದಲ್ಲೇ ಪ್ರಾರಂಭವಾಗಲಿ ಅಡ್ಡಿಯಿಲ್ಲ. ಆದರೆ ಅನ್ಯಭಾಷೆ ಹೆಸರಿನಲ್ಲಿ ಹಣ ಮಾಡುವ ದಂಧೆಗೆ ಅವಕಾಶ ನಿರಾಕರಿಸಬೇಕಿದೆ. ಶಾಲೇ ಹಂತದಿಂದಲೇ ಪರಿಣಾಮಕಾರಿಯಾಗಿ ಭಾಷೆಯಾಗಿ ಅಷ್ಟೇ ಇಂಗ್ಲೀಷ್ ಕಲಿಕೆ ಅಗತ್ಯವಿದೆ. 
ಸರ್ಕಾರಿ ಇಂಗ್ಲೀಷ್ ಪ್ರೀತಿ: ಸುಮಾರು 3174 ಸಕರ್ಾರಿ ಶಾಲೆಗಳ ಮುಚ್ಚಲು ಹೊರಟಿರುವ ರಾಜ್ಯ ಸಕರ್ಾರ 341 ಅಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭಿಸಲು ಹೊರಟಿರುವುದು ಹಾಸ್ಯಾಸ್ಪದ ಮತ್ತು ಅನುಮಾನಾಸ್ಪದ. ಇತ್ತ ಕನ್ನಡ ಶಾಲೆಗಳಲ್ಲಿಯೂ ಗುಣ ಮಟ್ಟದ ಶಿಕ್ಷಣ ನೀಡದೆ ಅತ್ತ ಆಂಗ್ಲ ಮಾಧ್ಯಮ ಶಾಲೆಗಳಿಗೂ ಸೌಲಭ್ಯ ಕಲ್ಪಿಸದೇ ಸಹಜವಾಗಿ ಪೋಷಕರಿಗೆ ಸಕರ್ಾರಿ ಶಾಲಾ ವ್ಯವಸ್ಥೆ ಬಗ್ಗೆ ಹೇಸಿಗೆ ಹುಟ್ಟಿಸಿ ಖಾಸಗಿ ಶಾಲೆಗಳತ್ತ ಮುಖಮಾಡಲಿ ಎನ್ನುವುದೇ ಆಗಿದೆ. ಶಿಕ್ಷಣದ ವ್ಯಾಪಾರಕ್ಕೆ ದಾರಿ ಮಾಡಿಕೊಡಲಿದೆ. ಏಳೆಂಟು ರೀತಿಯ ಶ್ರೇಣೀಕೃತ ಶೈಕ್ಷಣಿಕ ಶಾಲಾ ವ್ಯವಸ್ಥೆಯ ಬದಲಾಗಿ ಸಮಾನ ಶಾಲಾ ಶಿಕ್ಷಣ ಪದ್ಧತಿಯ ಮೂಲಕ ಅತೀ ಶ್ರಿಮಂತ ಮತ್ತು ಸ್ಲಂ ನ ವಿದ್ಯಾರ್ಥಿ ಒಟ್ಟಿಗೆ ಒದುವ- ಶಿಕ್ಷಣ ಕ್ರಮ ತರದ ಹೊರತು ಭಾಷೆ ಹೆಸರಿನ ಜಗಳಕ್ಕೆ ಅರ್ಥವಿರದು.
ಖಾಸಗಿ ಅನಧಿಕೃತ ಶಾಲೆಗಳ ಪರವಾನಿಗೆ ರದ್ದುಗೊಳಿಸಲು ಸರ್ಕಾರ ಮುಂದಾಗಿ ಭಾಷಾ ನೀತಿಯನ್ನು ಜಾರಿಗೊಳಿಸಬೇಕಿದೆ. ಮಾತೃ ಭಾಷೆಯ ಶಿಕ್ಷಣ ಪಡೆದವರಿಗೆ ಬದುಕಿನ ಭರವಸೆ ಮೂಡಿಸಲು, ಶಿಕ್ಷಣ, ಉದ್ಯೋಗದಲ್ಲಿ ಪ್ರಾತಿನಿಧ್ಯ, ವಿಜ್ಞಾನ - ತಂತ್ರಜ್ಞಾನ - ವೈಧ್ಯಕೀಯ ಶಿಕ್ಷಣ ಮತ್ತು ಕಾರ್ಯಾಂಗ-ನ್ಯಾಯಾಂಗವು ಮಾತೃಭಾಷೆಗೆ ತೆರೆದುಕೊಳ್ಳುವಂತೆ ಕ್ರಮ ವಹಿಸಬೇಕಿದೆ. ಶಾಶ್ವತ ಪರಿಹಾರವಾಗಿ ಜನಪರ ಚಿಂತನೆಗಳಿಗಾಗಿ ಚಳುವಳಿ ಬಲಗೊಳ್ಳಬೇಕಿದೆ. ಆ ಮೂಲಕ ಬಾಷೆ - ಬದುಕು ಹಸನಾಗಿಸಬೇಕಿದೆ. ಇಂಗ್ಲೀಷ್ ಭಾಷೆಯಾಗಿ ಕಲಿಯೋಣ, ಮಾತೃಭಾಷಾ ಮಾಧ್ಯಮದಲ್ಲಿ ಸಾಧನೆ ಮೆರೆಯೋಣ.  

                                                                                             -. ಎನ್.ಅನಂತ್ ನಾಯ್ಕ್
                                                                                              (ಕೃಪೆ ವಿದ್ಯಾರ್ಥಿ ಧ್ವನಿ)

No comments:

Post a Comment