Friday 22 June 2012

ನಮ್ಮೆಲ್ಲರ ಕನಸಿನ ಕೂಸು 'ವಿದ್ಯಾರ್ಥಿ ಧ್ವನಿ' ಬಿಡುಗಡೆಯಾಗಿದೆ

ಹೌದು ನಾನು ಎಸ್.ಎಫ್.ಐ ಗೆ ಸೇರಿದಾಗಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರ ಕನಸು ಒಂದು ಪತ್ರಿಯನ್ನು ಪ್ರಾರಂಬಿಸಬೇಕೆನ್ನುವುದು. ಅದಕ್ಕಾಗಿ ಎಲ್ಲರೂ ನಿರಂತರ ಚರ್ಚೆಗಳನ್ನು ನಡೆಸುತ್ತಿದ್ದೆವು, ಆ ಎಲ್ಲ ಚರ್ಚೆಗಳು ಸಾಕಾರಗೊಳ್ಳುವಂತೆ ನಮ್ಮೆಲ್ಲರ ಕನಸಿನ ಕೂಸಾಗಿದ್ದ 'ವಿದ್ಯಾರ್ಥಿ ಧ್ವನಿ' ಪತ್ರಿಕೆ ಬಿಡುಗಡೆಯಾಗಿಯೇ ಬಿಟ್ಟಿತು. ಜೂನ್ 16 ರಿಂದ 19 ರವರೆಗೆ ಕೊಪ್ಪಳದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಎಸ್.ಎಫ್.ಐ ನ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿತ್ತು ಅದೇ ಸಂರ್ಭದಲ್ಲಿ 18 ನೇ ತಾರೀಕಿನಂದು ಶಿಬಿರದಲ್ಲಿ ಸೇರಿದ್ದ 250 ಪ್ರತಿನಿಧಿಗಳ ಮುಂದೆ ನಾವುಗಳು ಇಷ್ಟು ವರ್ಷ ಕಾತುರದಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿತಲ್ಲ ಎಂಬ ಸಂತೋಷ. ಅದೇ ಸಂತೋಷವನ್ನು ನಾನು ಎಲ್ಲ ಪ್ರತಿನಿಧಿಗಳ ಮುಖಗಳಲ್ಲೂ ನೋಡಿ ಕಣ್ ತುಂಬಿಕೊಂಡೆ. ಪತ್ರಿಕೆಯ ಮೊದಲ ಸಂಚಿಕೆಯನ್ನು ಹೊರತರಲು ನಾನು ತೊಡಗಿಸಿಕೊಂಡಿದ್ದರಿಂದ (ಬಹಳ ದಿನಗಳ ಕನಸೂ ಆಗಿದ್ದರಿಂದ) ಬಿಡುಗಡೆಯಾದ ಮೇಲೆ ಪತ್ರಿಕೆಯ ಬಗೆಗಿನ ಅಭಿಪ್ರಾಯಗಳಿಗಾಗಿ ಕಾತುರದಿಂದಿದ್ದೆ ಆದರೆ ನಮ್ಮೆಲ್ಲರ ಶ್ರಮ ಸಾರ್ಥಕವಾಗಿದೆ ಎನಿಸಿದ್ದು ಪ್ರತಿಯೊಬ್ಬರೂ ಪತ್ರಿಕೆಯನ್ನು ನೋಡಿದಾಗ ಅದರ ಕುರಿತು ವ್ಯಕ್ತಪಡಿಸಿದ ಪ್ರಶಂಸೆಯ ಮಾತುಗಳು ಸಂತೋಷವನ್ನು ತರುವ ಜೊತೆಗೆ ಪತ್ರಿಕೆಯ ಜವಾಭ್ದಾರಿ ಹೊತ್ತಿರುವ ಇಡೀ ತಂಡದ ಕೆಲಸವನ್ನು ಹೆಚ್ಚಿಸಿದೆ.
ವಿದ್ಯಾರ್ಥಿ ಧ್ವನಿ ಬಿಡುಗಡೆಯು ಅತ್ಯಂತ ವಿಶೇಷವಾಗಿತ್ತು ಶಿಬಿರದಲ್ಲಿ ಭಾಗವಹಿಸಿದ್ದ ಅತ್ಯಂತ ಕಿರಿಯ ಸಂಗಾತಿಗಳಾದ ಕೊಪ್ಪಳದ ಮಂಜುನಾಥ್, ಗದಗ್ ನ ಸಂಗಮ್ಮ ಹಿರೇಮಠ, ಮಂಡ್ಯದ ನಟರಾಜು ಇವರುಗಳು ನಮ್ಮೆಲ್ಲರ ಕನಸಿನ ಬುತ್ತಿಯನ್ನ ಲೋಕಾರ್ಪಣೆಮಾಡಿ ಪತ್ರಿಕೆಯ ಪ್ರತಿಯನ್ನು ನನಗೆ ಹಸ್ತಾಂತರಿಸಿದಾಗ ನಿಜವಾಗಲೂ ನಾನು ಭಾವುಕನಾಗಿದ್ದೆ.
ಇದೇ ಸಂದರ್ಭದಲ್ಲಿ ನನಗೆ ಲೆನಿನ್ ರ ಮಾತು ನೆನಪಿಗೆ ಬರುತ್ತದೆ ಅವರು 'ಪತ್ರಿಕೆ ಚಳುವಳಿಯ ಅಸ್ತ್ರವಿದ್ದಂತೆ' ಎಂದು ಹೇಳಿದ್ದರು. ನಿಜ ಪ್ರಸಕ್ತ ಸಂದರ್ಭದಲ್ಲಿ ಮಾಧ್ಯಮಗಳು ಒಂದೆಡೆ ಜಾಗತೀಕರಣದ ಪ್ರಭಾವಗಳಿಗೆ ಒಳಗಾಗಿ ಆಳುವ ವರ್ಗದ ಪರವಾದ ಮತ್ತು ಉಳ್ಳವರ ಪರವಾದ ಸುದ್ದಿಗಳನ್ನು ಬಿತ್ತರಿಸುವುದರ ಜೊತೆಗೆ ಕೇವಲ ಸೆಕ್ಸ್, ಕ್ರೈಮ್, ಬ್ರೇಕಿಂಗ್ ಗಳ ಬೆನ್ನಹತ್ತಿ ಟಿ.ಆರ್.ಪಿ ರೇಟಿಂಗ್ ಮತ್ತು ಪ್ರಸಾರ ಹೆಚ್ಚಳಕ್ಕಾಗಿ ಅನಾರೋಗ್ಯಕರ ಸ್ಫರ್ಧೆಗೆ ಬಿದ್ದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತ ವಿದ್ಯಾರ್ಥಿ - ಯುವಜನರನ್ನು ದಾರಿತಪ್ಪಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿ ಚಳುವಳಿಯ ಮುಖವಾಣಿಯಾಗಿ ವಿದ್ಯಾರ್ಥಿ ಧ್ವನಿ ಪ್ರಾರಂಬವಾಗಿರುವುದು ಪ್ರಸಕ್ತ ಮಾಧ್ಯಮಗಳ ಎಲ್ಲ ಕೊರತೆಗಳನ್ನು ತುಂಬಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಮತ್ತು ದ್ವೈಮಾಸಿಕವಾಗಿರುವ ಪತ್ರಿಕೆ ಆದಷ್ಟು ಬೇಗ ಮಾಸಿಕವಾಗಲಿ ಮತ್ತು ಕರ್ನಾಟಕದಲ್ಲಿ ಎಲ್ಲರೂ ಗುರುತಿಸುವ ಉತ್ತಮ ಪತ್ರಿಕೆಯಾಗಿ ಮೂಡಿಬರಲಿ ಎಂದು ಆಶಿಸುತ್ತೇನೆ.

1 comment: