Showing posts with label ನನ್ನ ಅಭಿಪ್ರಾಯ. Show all posts
Showing posts with label ನನ್ನ ಅಭಿಪ್ರಾಯ. Show all posts

Friday, 18 July 2014

ಅತ್ಯಾಚಾರಗಳು ಆತಂಕವನ್ನು ಮೂಡಿಸುತ್ತಿವೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಪ್ರಕರಣಗಳನ್ನು ಗಮನಿಸಿದರೆ, ನಾವುಗಳು ಎಂತಹ ಅನಾಗರೀಕತೆ ಎಡೆಗೆ ಹೋಗುತ್ತಿದ್ದೇವೆಂದು ಅನಿಸುತ್ತಿದೆ. ಇಷ್ಟು ಮಾತ್ರವಲ್ಲದೆ, ಅತ್ಯಾಚಾರವನ್ನು ಮಾಡಿದ ಅನಾಗರೀಕರ ಕ್ರೋರ ಮನಸ್ಥಿತಿಯ ಬಗ್ಗೆ ಸಿಟ್ಟು ಬರುವ ಜೊತೆಗೆ ಅವರನ್ನು ಅಂತಹ ಸ್ಥಿತಿಗೆ ತಳ್ಳಿದ ಇಂದಿನ ಮಾಧ್ಯಮಗಳು (ನಿರಂತರವಾಗಿ ಟಿ.ಆರ್.ಪಿ ಗಾಗಿ ಹೆಚ್ಚೆಚ್ಚು ಸೆಕ್ಸ್ ಮತ್ತು ಕ್ರೈಮ ವಿಚಾರಗಳನ್ನೇ ತೋರಿಸುತ್ತಾರೆ) ಸಿನೇಮಾ, ನಮ್ಮ ಶಿಕ್ಷಣದ ವ್ಯವಸ್ಥೆ ಮತ್ತು ನಮ್ಮ ಸುತ್ತ ಮುತ್ತಲಿರುವ ಪರಿಸರುವೂ ಮುಖ್ಯ ಕಾರಣ ಎಂದೆನಿಸುತ್ತದೆ.  ಹಾಗಾಗಿ ಅತ್ಯಾಚಾರದ ವಿರುದ್ದ ಮಾತನಾಡುವಾಗ ತಪಿತಸ್ಥರಿಗೆ ಕಠಿಣ ಶಿಕ್ಷೆ ಯಾಗುವಂತೆ ಕಾನೂನು ಜಾರಿಗೆ ಬರ ಬೇಕೆಂದು ಒತ್ತಾಯಿಸುವಾಗಲೇ ಒಟ್ಟು ವಾತಾವರಣವನ್ನು ಬದಲಾಯಿಸುವ ಆಮೂಲಕ ಇಂತಹ ವಿಕೃತ ಮನಸ್ಥಿತಿಯಿಂದ ಇಂದಿನ ಯುವಜನರನ್ನು ಹೊರತರದಿದ್ದರೆ ಇಂತಹ ಘಟನೆಗಳಿಗೆ ಅಂತ್ಯವೇ ಇರುವುದಿಲ್ಲ. 

Sunday, 1 July 2012

ಪಿ.ಸಾಯಿನಾಥ್ ಬೆಂಗಳೂರಿಗೆ ಬಂದಿದ್ದಾಗ

ಜುಲೈ 1 ಪತ್ರಕರ್ತರ ದಿನಾಚರಣೆ ಅಂದು ಭಾರತದ ಪತ್ರಿಕಾ ರಂಗದ ದಿಕ್ಕನ್ನು ಬದಲಾಯಿಸಿದ, ಪತ್ರಿಕೋಧ್ಯಮಕ್ಕೆ ಹೊಸ ಭಾಶ್ಯೆ ಬರೆದ ಪಿ.ಸಾಯಿನಾಥ್ ರವರು ಬೆಂಗಳೂರಿಗೆ ಬಂದಿದ್ದರು. ಅವರು ಇಂಗ್ಲೀಷ್ ನಲ್ಲಿ ಬರೆದಿರುವ 'ಎವರಿ ಬಡಿ ಲವ್ಸ್ ದಿ ಡ್ರಾಟ್' ಪುಸ್ತಕವನ್ನು ಸೃಜನಶೀಲ ಬರಹಗಾರರಾದ ಜಿ.ಎನ್.ಮೋಹನ್ ಕನ್ನಡಕ್ಕೆ ಅನುವಾದಿಸಿದ್ದ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಪುಸ್ತಕ ಬೆಂಗಳೂರಿನ ಗಾಂಧಿ ಭವನದಲ್ಲಿ ಕಿಕ್ಕಿರಿ ಅಭಿಮಾನಿಗಳ ನಡುವೆ ಅಭನವ ಪ್ರಕಾಶನ ಬಿಡುಗೊಡೆಗೊಳಿತು. ಪುಸ್ತಕವನ್ನು ಬಿಡುಗಡೆಮಾಡಿದ ನಂತರ ಪಿ.ಸಾಯಿನಾಥ್ ರವರ ಕುರಿತಾದ 'ನ್ಯೂರೋ ಗೆಸ್ಟ್' ಸಾಕ್ಷಚಿತ್ರ ಪ್ರದರ್ಶನವಾಯಿತು. ಈ ಸಾಕ್ಷ ಚಿತ್ರವನ್ನು ನೋಡಿದಮೇಲಂತೂ ಪಿ.ಸಾಯಿನಾಥ್ ರ ಕೆಲಸದ ವೈಕರಿ ಅವರು ಬೆಳೆದು ಬಂದ ರೀತಿ ಮತ್ತು ದೇಶದ ದುಡಿಯುವ ವರ್ಗದ ಮೇಲೆ ಅದರಲ್ಲೂ ರೈತ ಸಮುದಾಯದ ಮೇಲೆ ಅವರಿಟ್ಟಿರುವ ಅಪಾರ ಶ್ರದ್ದೆ, ತಮ್ಮ ಬರಹಗಳ ಮೂಲಕ ರೈತ ಸಮುದಾಯದ ನೈಜ ಸಮಸ್ಯೆಗಳನ್ನು ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಅಂಶಗಳನ್ನು ಪತ್ರಿಕೆಗಳಿಗೆ ಬರೆಯುತ್ತಲೇ ಅವರು ಬೆಳದರು, ಆಮೂಲಕ ಆಳುವ ಸರ್ಕಾರಗಳ ಬೇಜವಾಭ್ದಾರಿತನವನ್ನು ಬಯಲಿಗೆಳೆಯುತ್ತ ಜವಾಭ್ದಾರಿಗಳ ಬಗ್ಗೆ ಎಚ್ಚರಿಸಿಕೊಂಡು ಭಾರತದ ಪತ್ರಿಕೋಧ್ಯಮದಲ್ಲೇ ಒಂದು ವಿಭಿನ್ನ ದೃಷ್ಟಿಕೋನವನ್ನು ಕೊಡುವ ಮೂಲಕ ಯು ಪತ್ರಕರ್ತರನ್ನು ಗ್ರಾಮೀಣ ಬಡ ಜನರ ಬಳಿಗೆ ಸೆಳೆದವರು ಪಿ.ಸಾಯಿನಾಥ್. 
ಇವರು ಮಾತನಾಡುತ್ತಾ ಜಾಗತೀಕರಣದ ಪರಿಣಾಮವಾಗಿ ಮಾಧ್ಯಮ ಉಧ್ಯಮವಾಗಿ ಬದಲಾಗಿದೆ, ಅಲ್ಲಿ ಎಲ್ಲರಿಗೂ ಲಾಭ ಮಾಡುವ ಉದ್ದೇಶ ಬಿಟ್ಟರೆ  ಜನರ ಸಮಸ್ಯೆಗಳನ್ನು ಕುರಿತು ವರದಿಗಳನ್ನು ಮಾಡುವ ಯಾವ ಉದ್ದೇಶವೂ ಇಲ್ಲ. ಅದಕ್ಕಾಗಿಯೇ ದೇಶದ ಯಾವುದೇ ದೃಶ್ಯಮಾಧ್ಯಮವಾಗಲೀ ಅಥವಾ ಮುದ್ರಣ ಮಾಧ್ಯಮವಾಗಲೀ ಕೃಷಿ, ನಿರುದ್ಯೋಗದಂತಹ ವಿಷಯಗಳನ್ನು ಒರತುಪಡಿಸಿ ಎಲ್ಲಾ ವಿಚಾರಗಳಗೂ ಪ್ರತ್ತೇಕ ವರದಿಗಾರರನ್ನು ನೇಮಿಸಿರುತ್ತಾರೆ ಎಂದರು.
ನನಗೆ ಪಿ.ಸಾಯುನಾಥ್ ತುಂಬ ಇಷ್ಟವಾಗುವುದು ಅವರು ಯಾವುದೇ ಒಂದು ಸಮಸ್ಯೆಯನ್ನು ನೋಡುವ ರೀತಿ ಮತ್ತು ಅದರ ಮೂಲಕ ಸಮಸ್ಯೆಯ ಆಳಕ್ಕಿಳಿದು ಅದನ್ನು ಪ್ರತ್ಯಕ್ಷವಾಗಿ ಕಂಡು ಅದನ್ನು ಧಾಖಲಿಸುವ ವಿಧಾನ ಮತ್ತು ಅವರು ಸಮಾಜದ ಎರಡು ತುದಿಗಳಲ್ಲಿ ನಡೆದಿರುವ ಘಟನೆಗಳನ್ನು ಆದರಿಸಿ ಅವುಗಳ ವೈರುಧ್ಯವನ್ನು ಬಹಳ ಸೊಗಸಾಗಿ ವಿವರಿಸುತ್ತಾರೆ ಉದಾಹರಣೆಗೆ ಅವರು ಯಾವಾಗಳೂ ಮಾತನಾಡುವಹಾಗೆ ಮಹಾರಷ್ಟ್ರದ ರಾಜಧಾನಿ ಬಾಂಬೆಯಲ್ಲಿ ಕಾಟನ್ ಬಟ್ಟೆ ಕುರಿತು ಲ್ಯಾಕ್ಮಿ ಕಂಪನಿಯಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಅದನ್ನು ವರದಿಮಾಡಲೆಂದು ದೇಶ-ವಿದೇಶಗಳಿಂದ 200 ಕ್ಕೂ ಹೆಚ್ಚು ಪತ್ರಕರ್ತರು, ಚಾಯಾಚಿತ್ರಗಾರರು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದರು. ಆದರೆ ಅದೇ ರಾಜ್ಯದ ಫ್ಯಾಶನ್ ಶೋ ನಡೆಯುವ 300 ಕಿ.ಮಿ ದೂರದಲ್ಲಿ ರುವ ವಿದರ್ಬಾದಲ್ಲಿ ರೈತರು ಅತ್ತಿ ಬೆಳೆದು ಬೆಲೆಸಿಗದೆ ಸಾಲಮಾಡಿ ಆತ್ಮಹತ್ಯೆಮಾಡಿಕೊಂಡಿದ್ದರೆ ಅದನ್ನು ವರದಿಮಾಡಲು ಕೇವಲ 5 ಜನ ಪತ್ರಕರ್ತರಿದ್ದರಂತೆ. ಅಂದರೆ ಭಾರತದ ಪತ್ರಿಕೋಧ್ಯಮದ ಆಧ್ಯತೆ ಏನೆಂದು ಕೊತ್ತಾತಿತ್ತಲ್ಲ. ಇದನ್ನು ಸಮಾಜದ ಮುಂದೆ ಅಂಕಿಸಂಖ್ಯೆ ಸಮೇತ ಸಾದರಪಡಿಸುವುದರಲ್ಲಿ ಸಾಯಿನಾಥ್ ಎಲ್ಲರಿಗೂ ಮಾದರಿಯಾಗಿದ್ದಾರೆ.

Friday, 22 June 2012

ನಮ್ಮೆಲ್ಲರ ಕನಸಿನ ಕೂಸು 'ವಿದ್ಯಾರ್ಥಿ ಧ್ವನಿ' ಬಿಡುಗಡೆಯಾಗಿದೆ

ಹೌದು ನಾನು ಎಸ್.ಎಫ್.ಐ ಗೆ ಸೇರಿದಾಗಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರ ಕನಸು ಒಂದು ಪತ್ರಿಯನ್ನು ಪ್ರಾರಂಬಿಸಬೇಕೆನ್ನುವುದು. ಅದಕ್ಕಾಗಿ ಎಲ್ಲರೂ ನಿರಂತರ ಚರ್ಚೆಗಳನ್ನು ನಡೆಸುತ್ತಿದ್ದೆವು, ಆ ಎಲ್ಲ ಚರ್ಚೆಗಳು ಸಾಕಾರಗೊಳ್ಳುವಂತೆ ನಮ್ಮೆಲ್ಲರ ಕನಸಿನ ಕೂಸಾಗಿದ್ದ 'ವಿದ್ಯಾರ್ಥಿ ಧ್ವನಿ' ಪತ್ರಿಕೆ ಬಿಡುಗಡೆಯಾಗಿಯೇ ಬಿಟ್ಟಿತು. ಜೂನ್ 16 ರಿಂದ 19 ರವರೆಗೆ ಕೊಪ್ಪಳದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಎಸ್.ಎಫ್.ಐ ನ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿತ್ತು ಅದೇ ಸಂರ್ಭದಲ್ಲಿ 18 ನೇ ತಾರೀಕಿನಂದು ಶಿಬಿರದಲ್ಲಿ ಸೇರಿದ್ದ 250 ಪ್ರತಿನಿಧಿಗಳ ಮುಂದೆ ನಾವುಗಳು ಇಷ್ಟು ವರ್ಷ ಕಾತುರದಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿತಲ್ಲ ಎಂಬ ಸಂತೋಷ. ಅದೇ ಸಂತೋಷವನ್ನು ನಾನು ಎಲ್ಲ ಪ್ರತಿನಿಧಿಗಳ ಮುಖಗಳಲ್ಲೂ ನೋಡಿ ಕಣ್ ತುಂಬಿಕೊಂಡೆ. ಪತ್ರಿಕೆಯ ಮೊದಲ ಸಂಚಿಕೆಯನ್ನು ಹೊರತರಲು ನಾನು ತೊಡಗಿಸಿಕೊಂಡಿದ್ದರಿಂದ (ಬಹಳ ದಿನಗಳ ಕನಸೂ ಆಗಿದ್ದರಿಂದ) ಬಿಡುಗಡೆಯಾದ ಮೇಲೆ ಪತ್ರಿಕೆಯ ಬಗೆಗಿನ ಅಭಿಪ್ರಾಯಗಳಿಗಾಗಿ ಕಾತುರದಿಂದಿದ್ದೆ ಆದರೆ ನಮ್ಮೆಲ್ಲರ ಶ್ರಮ ಸಾರ್ಥಕವಾಗಿದೆ ಎನಿಸಿದ್ದು ಪ್ರತಿಯೊಬ್ಬರೂ ಪತ್ರಿಕೆಯನ್ನು ನೋಡಿದಾಗ ಅದರ ಕುರಿತು ವ್ಯಕ್ತಪಡಿಸಿದ ಪ್ರಶಂಸೆಯ ಮಾತುಗಳು ಸಂತೋಷವನ್ನು ತರುವ ಜೊತೆಗೆ ಪತ್ರಿಕೆಯ ಜವಾಭ್ದಾರಿ ಹೊತ್ತಿರುವ ಇಡೀ ತಂಡದ ಕೆಲಸವನ್ನು ಹೆಚ್ಚಿಸಿದೆ.
ವಿದ್ಯಾರ್ಥಿ ಧ್ವನಿ ಬಿಡುಗಡೆಯು ಅತ್ಯಂತ ವಿಶೇಷವಾಗಿತ್ತು ಶಿಬಿರದಲ್ಲಿ ಭಾಗವಹಿಸಿದ್ದ ಅತ್ಯಂತ ಕಿರಿಯ ಸಂಗಾತಿಗಳಾದ ಕೊಪ್ಪಳದ ಮಂಜುನಾಥ್, ಗದಗ್ ನ ಸಂಗಮ್ಮ ಹಿರೇಮಠ, ಮಂಡ್ಯದ ನಟರಾಜು ಇವರುಗಳು ನಮ್ಮೆಲ್ಲರ ಕನಸಿನ ಬುತ್ತಿಯನ್ನ ಲೋಕಾರ್ಪಣೆಮಾಡಿ ಪತ್ರಿಕೆಯ ಪ್ರತಿಯನ್ನು ನನಗೆ ಹಸ್ತಾಂತರಿಸಿದಾಗ ನಿಜವಾಗಲೂ ನಾನು ಭಾವುಕನಾಗಿದ್ದೆ.
ಇದೇ ಸಂದರ್ಭದಲ್ಲಿ ನನಗೆ ಲೆನಿನ್ ರ ಮಾತು ನೆನಪಿಗೆ ಬರುತ್ತದೆ ಅವರು 'ಪತ್ರಿಕೆ ಚಳುವಳಿಯ ಅಸ್ತ್ರವಿದ್ದಂತೆ' ಎಂದು ಹೇಳಿದ್ದರು. ನಿಜ ಪ್ರಸಕ್ತ ಸಂದರ್ಭದಲ್ಲಿ ಮಾಧ್ಯಮಗಳು ಒಂದೆಡೆ ಜಾಗತೀಕರಣದ ಪ್ರಭಾವಗಳಿಗೆ ಒಳಗಾಗಿ ಆಳುವ ವರ್ಗದ ಪರವಾದ ಮತ್ತು ಉಳ್ಳವರ ಪರವಾದ ಸುದ್ದಿಗಳನ್ನು ಬಿತ್ತರಿಸುವುದರ ಜೊತೆಗೆ ಕೇವಲ ಸೆಕ್ಸ್, ಕ್ರೈಮ್, ಬ್ರೇಕಿಂಗ್ ಗಳ ಬೆನ್ನಹತ್ತಿ ಟಿ.ಆರ್.ಪಿ ರೇಟಿಂಗ್ ಮತ್ತು ಪ್ರಸಾರ ಹೆಚ್ಚಳಕ್ಕಾಗಿ ಅನಾರೋಗ್ಯಕರ ಸ್ಫರ್ಧೆಗೆ ಬಿದ್ದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತ ವಿದ್ಯಾರ್ಥಿ - ಯುವಜನರನ್ನು ದಾರಿತಪ್ಪಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿ ಚಳುವಳಿಯ ಮುಖವಾಣಿಯಾಗಿ ವಿದ್ಯಾರ್ಥಿ ಧ್ವನಿ ಪ್ರಾರಂಬವಾಗಿರುವುದು ಪ್ರಸಕ್ತ ಮಾಧ್ಯಮಗಳ ಎಲ್ಲ ಕೊರತೆಗಳನ್ನು ತುಂಬಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಮತ್ತು ದ್ವೈಮಾಸಿಕವಾಗಿರುವ ಪತ್ರಿಕೆ ಆದಷ್ಟು ಬೇಗ ಮಾಸಿಕವಾಗಲಿ ಮತ್ತು ಕರ್ನಾಟಕದಲ್ಲಿ ಎಲ್ಲರೂ ಗುರುತಿಸುವ ಉತ್ತಮ ಪತ್ರಿಕೆಯಾಗಿ ಮೂಡಿಬರಲಿ ಎಂದು ಆಶಿಸುತ್ತೇನೆ.